Tuesday, 15 August 2017

ಕೆರೆ ಏರಿ

ಕೆರೆ ಏರಿ


ಸಾಹಿತ್ಯ: ಯೋಗರಾಜ್ ಭಟ್
ಗಾಯನ: ಸೋನು ನಿಗಮ್
ಸಂಗೀತ: ವಿ. ಹರಿಕೃಷ್ಣ
ಚಿತ್ರ: ಮುಗುಳು ನಗೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ
ಅಂದ ಕಣ್ಣು ಮುಚ್ಚಿ

ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬ
ಅರಳ್ಯಾವೆ ಕಿಡಿಗೇಡಿ ಕೆಂದಾವರೆ
ನಾವ್ ಕನಸಲ್ಲಿ ಹೆಂಗಪ್ಪ ಆರಾಮಾಗಿರಬೇಕು
ಹಗಲೊತ್ತೇ ಹಿಂಗಾದರೆ?

ಹಿಂಗೇ ಹಿಂದೊಮ್ಮೆ ಎಂದೋ ನಡೆದಂತೆ
ಸುತ್ತಾ ಮುತ್ತಾ ಮರೆತು ಕುಂತೆ
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು
ಮತ್ತೆ ಮತ್ತೆ ನೆನಪಾದಂತೆ

ಮನದ ಗುಡಿಯಲ್ಲಿ ಹಚ್ಚಿಕೊಂಡಿರುವೆ
ಒಂದು ಎರಡು ಮೂರು ಹಣತೆ
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ
ಅನ್ನೋದನ್ನೆ ನಾನು ಮರೆತೆ

ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ
ಹಣೆ ಮೇಲೆ ಮೂರ್ನೇ ಗೆರೆ
ಈ ಬದುಕಲ್ಲಿ ಯಾವನೂ ಆರಾಮಾಗಿರಲಾರ
ಹಳೆ ನೆನಪೇ ನಿಂಥೋದರೆ

ತುಂಬಾ ಅನಿಸುವುದು ನನ್ನಂಥಾ ನನಗೂ
ಪ್ರೀತಿ ಇನ್ನೂ ಗೊತ್ತಾಗಿಲ್ಲ
ಹಂಗಾಗಿ ನಾನು ನನ್ನಾ ಜೊತೆಗೇನೇ
ಜಾಸ್ತಿ ಏನೂ ಮಾತಾಡಲ್ಲ

ಒಂದು ಸರಿಯಾದ ದುಃಖ ಇರದಿದ್ರೆ
ಕಣ್ಣು ಕೂಡಾ ತುಂಬೋದಿಲ್ಲ
ಉಂಬಾ ಪ್ರೀತಿಸುವೆ ತುಂಟು ತನವನ್ನು
ಗಾಂಭೀರ್ಯವೇ ನಂಗಾಗಲ್ಲ

ಯಾವ್ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ
ಯಾರ್ ಮೇಲೂ ಬಟ್ಟೆ ಬರೆ
ನಾ ಅನಿಸಿದ್ದು ಹೇಳಿರುವೆ ನನ್ನ ಹುಡಿಗಿರೇ ಕ್ಷಮಿಸಿ
ನೀವೆಲ್ಲಾ ಸಿಟ್ಟಾದರೆ


No comments:

Post a Comment